ಗುರುವಾರ, ಜೂನ್ 17, 2010

ನೆನಪುಗಳ ಮಾತು ಮಧುರ

ಯಾವಾಗಲೂ ಏನನ್ನಾದರು ಬರೆಯಲು ಕೂತರೆ ಮೊದಲು ನನ್ನ ತಲೆಯಲ್ಲಿ ಬರೋ ವಿಷಯ ಅಂದರೆ "ಜೀವನ". ನಾನೇನು ಜೀವನದ ಬಗ್ಗೆ ಬರೆಯುವಷ್ಟು ಅನುಭವಿಯಲ್ಲ. ಆದರು ಅಲ್ಲಿ ಇಲ್ಲಿ, ಚೂರು ಪಾರು ಜೀವನದ ರುಚಿಯನ್ನು ಕಂಡಿದ್ದೇನೆ, ಅನುಭವಿಸಿದ್ದೇನೆ.

ಹಮ್...... ಶಾಲೆಯಲ್ಲಿದ್ದಾಗ ಅದು ಇದು ಸ್ಪರ್ಧೆಗಳ ಸಲುವಾಗಿ ಅಥವಾ ಸುಮ್ಮನೆ ಸಮಯ ಕೊಲ್ಲುವುದಕ್ಕಾಗಿ ಬರೆಯುವ ರೂಢಿ ಇತ್ತು. ನಂತರ ಇಂಜಿನೀಯರಿಂಗ್ ಬಂದ ಮೇಲೆ ಅಂತರಾಳವನ್ನು ಹಗುರಗೊಳಿಸುವ ಪ್ರಯತ್ನವೇ ನಡೆದಿರಲಿಲ್ಲ. ಹೆಚ್ಚು ಕಮ್ಮಿ ನಾನೂ ಇಂಜಿನ್ ಆಗಿಬಿಟ್ಟಿದ್ದೀನೇನೋ ಅನಿಸುತ್ತಿತ್ತು. ಆದರೆ ಈಗ ಒಮ್ಮೆ ಕಣ್ಮುಚ್ಚಿ ಕುಳಿತರೆ ಎಷ್ಟೊಂದು ಗರಿ ಗರಿ ನೆನಪುಗಳು.

ಇಂಜಿನೀಯರಿಂಗ್ ಸೇರಿಕೊಂಡರೆ ಸಾಕು, ಆಮೇಲೆ ಎಲ್ಲವೂ ಸೆಟಲ್ ಆದ ಹಾಗೆ ಎನ್ನುವುದು ತಲೆಯಲ್ಲಿತ್ತು. ಅದಕ್ಕಾಗಿ ’ಪಿಯುಸಿ’ಯಲ್ಲಿರುವಾಗ ಟಿ.ವಿ., ನೆಂಟರಿಷ್ಟರು ಎಲ್ಲ ಮೋಹಗಳನ್ನು ಬದಿಗಿಟ್ಟು ಓದಿದ್ದೇ ಓದಿದ್ದು. ನಂತರ ಇಲ್ಲಿ ಬಂದಮೇಲೆ ’ಇಂಜಿನೀಯರಿಂಗ್ ಒಂದು ಚೆನ್ನಾಗಿ ಮಾಡಬೇಕಂತೆ, ಆವಾಗ ಲೈಫ್ ಸೆಟಲ್ ಆದಂತೆ’ ಎಂದು ಮತ್ತೊಬ್ಬರ ನುಡಿಮುತ್ತು.

ಜೀವನ ಅಂದರೆ ಹಾಗೆ - " ಎಂದೋ ಬರುವ ಸುಖದ ಸಲುವಾಗಿ, ಕೊನೆಯಿಲ್ಲದ ಕನಸುಗಳ ಕೊಂಡಿಯನ್ನು ಜೊಡಿಸುತ್ತಾ ಜೋಡಿಸುತ್ತ ಸಾಗುವ ಪಯಣ".

ಅಪ್ಪ- ಅಮ್ಮನನ್ನು, ಮನೆಯನ್ನು, ಊರನ್ನು ಬಿಟ್ಟು ರೂಢಿಯೇ ಇಲ್ಲದವಳು ಹೊಸ್ಟೆಲ್ ಸೇರಿದರೆ ಹೇಗಾಗಬಹುದು??? ನನ್ನ ಸ್ತಿಥಿಯೂ ಹಾಗೇ ಆಗಿತ್ತು. ಮನೆಯಲ್ಲಿ ಹೇಳಲು, ಕೇಳಲು ಯಾರೂ ಇರಲಿಲ್ಲ. ಇದ್ದದ್ದೆಲ್ಲವೂ ನಂದೇ. ಹಾಗೇ ಹೊಸ್ಟೆಲ್ನಲ್ಲು ಆಗಬೇಕು ಅಂದರೆ ಯಾರು ಕೇಳುತ್ತಾರೆ?? ದಿನವೂ ಯಾವುದಾದರು ಒಂದು ವಿಷಯಕ್ಕೆ ಜಗಳ. ಸಣ್ಣ ಪುಟ್ಟದ್ದಕ್ಕೂ ಮಾತಿನ ಚಕಮಕಿ. ಸುಮ್ಮನೆ ಕಿತ್ತಾಟ. ಆದರೆ ಅದೇ ಜಗಳಗಳು ಇಂದು - ’ ಎಂದು ಮರೆಯದ ಗೆಳೆತನಕ್ಕೆ ಬುನಾದಿಯಾಗಿವೆ.

ಇಂಟರಾಕ್ಶನ್ ಸೆಷನ್ಗಳು ಹೊಸ್ಟೆಲ್ನ ಅವಿಭಾಜ್ಯ ಪ್ರಕ್ರಿಯೆ. ಸಣ್ಣವರಿದ್ದಾಗ ಹಾಡುತ್ತಿದ್ದ ಪದಗಳಿಂದ ಹಿಡಿದು, ಪೋಕಾಕಿ ಕುಣಿತದವರೆಗೂ.... ಭರತನಾಟ್ಯದ ಆರಂಭದಿಂದ ನನ್ನಂತವರನ್ನು(!!!) ಹಾಡಿಸಿದ್ದರವರೆಗೂ... ಹೀಗೆ ಪಟ್ಟಿ ಬೆಳೆಯುತ್ತದೆ. ನೆನೆಸಿಕೊಂಡರೆ ಮನಸ್ಸಲ್ಲಿ ಇನ್ನೂ ಭಾವನೆಗಳು ಕಚಗುಳಿಯಿಡುತ್ತವೆ.

ಇನ್ನು ಕಾಲೇಜ್ ವಿಷಯಕ್ಕೆ ಬಂದರೆ, ಅಬ್ಬಾ!!!! ಎಷ್ಟೊಂದು ಹೊಸ ಮುಖಗಳು. ಎಲ್ಲಿಂದ ಬರುತ್ತಾರಪ್ಪಾ ಇಷ್ಟೊಂದು ಜನ ಅಂತ.... ಮೊದಲ ದಿನ ಮನಸ್ಸಲ್ಲಿ ಭಯ ಬಿಟ್ಟರೆ ಬೇರೇನೂ ಇರಲಿಲ್ಲ. ಮೊದಲೇ ಧಾರವಾಡದ ಭಾಷೆ. ಪ್ರತಿಯೊಂದು ಶಬ್ದವೂ ಬೈದಂತೆ ಅನಿಸುತ್ತಿತ್ತು. ಆದರೆ ಗಡಿಯಾರ ಹತ್ತು ಸುತ್ತು ಹೊಡೆಯುವುದರಲ್ಲಿ ಹಲವರು ಖಾಸ್ ಖಾಸ್ ದೋಸ್ತರಗಿದ್ದರು. ಮತ್ತೆರಡು ದಿನದಲ್ಲಿ ಒಂದು ಪುಟ್ಟ ಗ್ಯಾಂಗ್ ಮಾಡಿಕೊಂಡು ತರಗತಿಯಲ್ಲಿ ಗಲಾಟೆ ಮಾಡಲು ಆರಂಭಿಸಿದ್ದೆವು,ಹಾಗೆ ಬೈಸ್ಕೊಂಡ್ದು ಇದ್ದೆವು.

ವಿದ್ಯಾರ್ಥಿ ಜೀವನದಲ್ಲಿ ಹಲವರು ( ಎಲ್ಲರೂ ಅಂದರೆ ಉಚಿತವಗಬಹುದೇನೋ) ದ್ವೇಷಿಸುವ ಸಮಯವೆಂದರೆ ಪರೀಕ್ಷಾ ಸಮಯ. ಆ ನಿದ್ರೆ ಇಲ್ಲದ ರಾತ್ರಿಗಳು, ನಮಗೇ ಅರ್ಥವಾಗದ್ದನ್ನು ಬೇರೆಯವರು ಅರ್ಥ ಮಾಡಿಕೊಳ್ಳಲಿ ಅಂತ ನಿರೀಕ್ಷಿಸಿ ಬರೆಯುವ ಉತ್ತರ ಪತ್ರಿಕೆ, ನಿದ್ರೆಯನ್ನು ತಡೆದು ತಡೆದು ಓದೋ ರೀತಿ, ಮತ್ಯಾವತ್ತೂ ಸಿಗುವುದಿಲ್ಲ.

ಹೀಗೆ ಹತ್ತು ಹಲವು ಆಸೆ, ನಿರೀಕ್ಷೆ, ಆತಂಕ, ಭಯ, ಕನಸುಗಳೊಂದಿಗೆ ಪ್ರಾರಂಭವಾದ ವಿದ್ಯಾರ್ಥಿ ಜೀವನ - ಇಂದು ತನ್ನ ಕೊನೆಯ ಘಟ್ಟಕ್ಕೆ ಬಂದಿದೆ. ಮನೆಗೆ ಬಂದು ಕುಳಿತ ಈ ಘಳಿಗೆಯಲ್ಲಿ, ಮನಸ್ಸು ಹಳೆಯ ಸವಿ ನೆನಪುಗಳನ್ನು ಮೆಲುಕು ಹಾಕುತ್ತಿದೆ. ಏನೂ ಇಲ್ಲವೆಂದರೂ ಏನನ್ನೋ ಕಳೆದುಕೊಂಡಿರುವ ಭಾವನೆ ಮನಸ್ಸನ್ನು ಕಾಡುತ್ತಿದೆ.
ಕಾಡುತ್ತಿರುವ ನೆನಪುಗಳನ್ನು ಕಣ್ಮುಚ್ಚಿ ಸವಿಯುತ್ತಿರುವ

- ಕಾವ್ಯ

15 ಕಾಮೆಂಟ್‌ಗಳು:

  1. hmmmmm.........i didnt know tht the LEKHAKI inside u........
    nice one......
    spelling mistake of hostel:)

    ಪ್ರತ್ಯುತ್ತರಅಳಿಸಿ
  2. @Aparna, pavi, sam and poo Thanku... :)
    @ Chaitanya - thanku too and i ll correct the spell mistakes from next 1.... @kiddo thanks :)

    ಪ್ರತ್ಯುತ್ತರಅಳಿಸಿ
  3. ಕನ್ನಡ ಪ್ರೇಮಿಗೆ ..........ಜೈ

    ಅಂಕಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ ...!!!!

    ಪ್ರತ್ಯುತ್ತರಅಳಿಸಿ